ಹೊನ್ನಾವರ : ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಸೆಪ್ಟೆ೦ಬರ್ 28 , 2015
|
ಸೆಪ್ಟೆ೦ಬರ್ 28, 2015
|
ಹೊನ್ನಾವರ : ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನ
ಹೊನ್ನಾವರ :
ತಾಲೂಕಿನ ಗುಣವಂತೆಯ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗನ ಮಂಡಳಿ ಕರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಸುತ್ತ ಬಂದಿರುವ ಮಾಸದ ಆಟದ ಈ ವರ್ಷದ ಪ್ರಥಮ ಯಕ್ಷಗಾನ ಪ್ರದರ್ಶನ ದಕ್ಷಯಜ್ಞ ಪ್ರೇಕ್ಷಕರ ಮನ ಸೂರೆಗೊಂಡಿತು.
ಮುರ್ಡೇಶ್ವರದ ವನಮಾಲಾ ಆರ್. ಹೆಗಡೆ, ಶಂಭು ಎನ್. ಹೆಗಡೆ ಮತ್ತು ಮಹಾಬಲೇಶ್ವರ ಪಿ. ಭಂಡಾರಿ ಪ್ರಾಯೋಜಕತ್ವವ ವಹಿಸಿದ್ದರು. ಸಾರ್ವಜನಿಕರಿಗೆ ಉಚಿತವಾಗಿ ಯಕ್ಷಗಾನ ನೋಡಲು ಅವಕಾಶ ಕಲ್ಪಿಸಲಾಗಿತ್ತು.
ಹಿಮ್ಮೇಳದಲ್ಲಿ ಭಾಗವತರಾಗಿ ದಂತಳಿಗೆ ಅನಂತ ಹೆಗಡೆ, ಮದ್ದಲೆವಾದಕರಾಗಿ ತಾರೇಸರದ ಪರಮೇಶ್ವರ ಹೆಗಡೆ, ಚಂಡೆವಾದಕರಾಗಿ ಶಿರಸಿಯ ಪ್ರಸನ್ನ ಭಟ್, ಮುಮ್ಮೇಳದ ಕಲಾವಿದರಾಗಿ ಶಿರಸಿಯ ಪ್ರೊ. ಎಂ. ಎ. ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಶಿರಳಗಿ ತಿಮ್ಮಪ್ಪ ಹೆಗಡೆ, ಹಂಸಳ್ಳಿಯ ಈಶ್ವರ ಭಟ್ಟ, ಬ್ರಹ್ಮೂರಿನ ರಾಘವ ಹೆಗಡೆ, ಚಂದಶೇಖರ ಎನ್. ವಿನಾಯಕ ನಾಯ್ಕ ಗುಂಡಿಬೆಲು, ಸ್ತ್ರೀ ಪಾತ್ರದಲ್ಲಿ ಯಲ್ಲಾಪುರದ ಸದಾಶಿವ ಭಟ್ಟ, ಮಹಾವೀರ ಜೆನ್ ಪಾತ್ರ ನಿರ್ವಹಿಸಿದರು.
ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾಸದ ಆಟದ ಪ್ರಾಯೋಜಕರಿಗೆ ವೇದಿಕೆಯಲ್ಲಿ ಗೌರವ ಅರ್ಪಿಸಿದರು.
ಕೃಪೆ :
vijaykarnataka
|
|
|