ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಕೀರಿಕ್ಕಾಡು ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಡಿಸೆ೦ಬರ್ 23 , 2014
|
ಡಿಸೆ೦ಬರ್ 23, 2014
|
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಕೀರಿಕ್ಕಾಡು ಪ್ರಶಸ್ತಿ
ಸುಳ್ಯ :
ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 70ನೇ ವಾರ್ಷಿ ಕೋತ್ಸವ ಹಾಗೂ ಸಂಘದ ಸಂಸ್ಥಾಪಕ ಕೀರಿಕ್ಕಾಡು ವಿಷ್ಣು ಭಟ್ಟರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಡಿ. 26ರಂದು ಕೀರಿಕ್ಕಾಡು ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಕೀರಿಕ್ಕಾಡು ವಿಶ್ವವಿನೋದ ಬನಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ ಕಾರ್ಯಕ್ರಮ ಆರಂಭವಾಗ ಲಿದೆ. ಯೋಗ ಸಾಧಕ ಗೋಪಾಲಕೃಷ್ಣ ದೇಲಂಪಾಡಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಕಲಾವಿದ ಕೆ.ಸಿ. ಪಾಟಾಳಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರಿಗೆ ಕೀರಿಕ್ಕಾಡು ಪ್ರಶಸ್ತಿ ನೀಡಲಾಗುವುದು.
ಸುಳ್ಯ ಪ್ರತಿಭಾ ವಿದ್ಯಾಲಯದ ಪ್ರಿನ್ಸಿಪಾಲ್ ವೆಂಕಟರಾಮ ಭಟ್ ಅಭಿನಂದನೆ ಭಾಷಣ ಮಾಡಲಿದ್ದಾರೆ. ಸಂಘದ ಹಿರಿಯ ಸದಸ್ಯ ಕಲ್ಲಡ್ಕ ಲಕ್ಷ್ಮೀನಾರಾಯಣ ಕಲ್ಲೂರಾಯ ಅವರನ್ನು ಗೌರವಿಸಲಾಗುತ್ತದೆ.
ಹಿರಿಯ ಸಹಕಾರಿ ಧುರೀಣ ಊಜಂಪಾಡಿ ನಾರಾಯಣ ನಾಯ್ಕ್, ಪೈವಳಿಕೆ ಬೆನಕ ಯಕ್ಷ ಕಲಾ ವೇದಿಕೆ ಅಧ್ಯಕ್ಷ ದೇವಕಾನ ಕೃಷ್ಣ ಭಟ್ ಅತಿಥಿಗಳಾಗಿ ಭಾಗವಹಿ ಸಲಿದ್ದಾರೆ. ಬಳಿಕ 'ಕೃಷ್ಣಾರ್ಜುನ' ಯಕ್ಷಗಾನ ತಾಳಮದ್ದಳೆ, ಖಂಡಿಗೆಮೂಲೆ ಯಕ್ಷಸಿರಿ ಕಲಾ ವೇದಿಕೆ ಸದಸ್ಯರಿಂದ 'ಶ್ರೀರಾಮ ದರ್ಶನ' ಯಕ್ಷಗಾನ ಬಯಲಾಟ ಹಾಗೂ ಅತಿಥಿ ಕಲಾವಿದರಿಂದ 'ದಕ್ಷಾಧ್ವರ' ಬಯಲಾಟ ನಡೆಯಲಿದೆ ಎಂದು ತಿಳಿಸಿದರು.
ಕೃಪೆ :
http://vijaykarnataka.com
|
|
|